Thursday, July 1, 2010

ವಿಷ್ಣುವರ್ದನ ಹೆಸರಿಗೆ ಅವರವರ ಅಭಿಪ್ರಾಯಗಳು


ನಟ ದ್ವಾರಕೀಶರವರು ನಿರ್ಮಿಸಿದ ಚಿತ್ರಕ್ಕೆ ವಿಷ್ಣುವರ್ದನ ಎಂಬ ಹೆಸರಿಡಲು ಹೊರಟಾಗ ಭಾರತಿ ವಿಷ್ಣುವರ್ದನರವರು ಹಾಗೂ ವಿಷ್ಣುವರ್ದನ ಅಭಿಮಾನಿಗಳು ದ್ವಾರಕೀಶರವರ ಅನುಮತಿಯನ್ನು ನಿರಾಕರಿಸಿದರು.

ವಿಷ್ಣುವರ್ದನ ಅಭಿಮಾನಿಗಳು ಹೇಳುವ ಪ್ರಕಾರ "ಡಾ.ವಿಷ್ಣುವರ್ದನರವರ ಹೆಸರು ಇಡಲು ನಾವು ಯಾವುದೇ ರೀತಿಯ ಅನುಮತಿಯನ್ನು ಕೋಡಲಾಗುವುದಿಲ್ಲ ಅವರು ದುಡ್ಡಿಗೊಸ್ಕರ ಚಿತ್ರಕ್ಕೆ ಹೆಸರಿಡಲು ಹೋರಟಿದ್ದಾರೆ" ಎಂದು ಹೇಳಿದರು.

ಭಾರತಿ ವಿಷ್ಣುವರ್ದನರವರು "ನಾನೂ ಈ ಚಿತ್ರಕ್ಕೆ ವಿಷ್ಣುವರ್ದನರವರ ಹೆಸರಿಡಲು ದ್ವಾರಕೀಶರವರಿಗೆ ಬೇಡ ಎಂದು ಹೇಳಿದ್ದೇನೆ. ಆದರು ಅವರು ಅದನ್ನು ಲಕ್ಷ ಕೋಡದೆ, ವಿಷ್ಣುವರ್ದನ ಎಂದು ಹೆಸರಿಡಲು ಮುಂದಾಗಲೂ ಹೋರಟಿದ್ದಾರೆ. ಹಿಂದೆ ಅವರು ಎನೂ ಮಾಡಿದ್ದಾರೆಂದು ನಮಗೆ ಗೊತ್ತು, ಆದರೆ ನಾವು ಅದನ್ನು ಹೇಳತಾಯಿಲ್ಲ ಆ ವಿಷಯವನ್ನು ಹೇಳಿದರೆ ಬೇರೆನೇ ಆಗುತ್ತೇ. ದ್ವಾರಕೀಶರವರು ಮಕ್ಕಳ ಮೇಲೆ ಹಾಗೂ ದೇವರ ಮೇಲೆ ಆಣೇ ಮಾಡುವುದು ಅವರಿಗೆ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ವಿಷ್ಣುವರ್ದನರವರ ಹೆಸರಿಡಲು ನಾವು ಯಾವುದೇ ರೀತಿಯ ಅನುಮತಿ ಮಾಡಿ ಕೊಡುವುದಿಲ್ಲ" ಎಂದು ಅಭಿಪ್ರಾಯವನ್ನು ಹೇಳಿದರು.

ಕರ್ನಾಟಕ ವಾಣಿಜ್ಯ ಮಂಡಳಿಯ ಅದ್ಯಕ್ಷರಾದ ವಸಂತ ಕುಮಾರ ಪಾಟೀಲರವರು "ನಾವೂ ಡಾ.ವಿಷ್ಣುವರ್ದನರವರ ಹೆಸರನ್ನು ಬದಲಾಗಿ ಬೇರೆ ಹೆಸರಿಡಲೂ ಹೇಳಿ ಈ ಹೆಸರನ್ನು ನಿರಾಕರಿಸಿದ್ದೇವೆ. ಹಾಗೇನೆ ಭಾರತಿ ವಿಷ್ಣುವರ್ದನರವರು ಕೂಡ ಹೆಸರಿಡಲೂ ಬೇಡ ಎಂದು ಹೇಳಿದ್ದಾರೆ." ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

No comments:

Post a Comment