Thursday, July 1, 2010

ವಿವಾದಕ್ಕೆ ಇಡಾದ ವಿಷ್ಣುವರ್ದನ ಟೈಟಲ


ನಿರ್ಮಾಪಕ ಹಾಗೂ ನಟರಾದ ದ್ವಾರಕೀಶ ನಿರ್ಮಾಣ ಮಾಡಿದ ಸುದೀಪ ಅದಕ್ಕೆ ನಾಯಕನಾಗಿ ಚಿತ್ರವನ್ನು ಮಾಡುತಿದ್ದಾರೆ. ಆ ಚಿತ್ರಕ್ಕೆ ವಿಷ್ಣುವರ್ದನ ಎಂಬ ಹೆರಸರಿಡಲೂ ತಯಾರಾಗಿದ್ದು ಆದರೆ ಆ ಹೆಸರು ಈಗ ವಾಗ್ದಾಳಿಗೆ ಕಾರಣವಾಗಿದೆ. ಈ ಚಿತ್ರಕ್ಕೆ ನಾಮಕರಣವನ್ನು ಆಯ್ಕೆ ಮಾಡಿದ್ದು ನಾಯಕ ನಟ ಸುದೀಪ. ಆದರೆ ಡಾ.ವಿಷ್ಣುವರ್ದನನ ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ದನ 'ವಿಷ್ಣುವರ್ದನ್' ಹೆಸರಿಡಲೂ ಸಮ್ಮತಿ ಮಾಡಿಕೊಡುವದಿಲ್ಲ ಎಂದಿದ್ದಾರೆ.

ಆದರೆ ಇದು ಈ ಚಿತ್ರ ಡಾ.ವಿಷ್ಣುವರ್ದನ ರವರ ಜೀವನ ಚರಿತ್ರೆ ಇದಾಗಿಲ್ಲ ಕಾರಣ 'ವಿಷ್ಣುವರ್ದನ' ಹೆಸರಿಟ್ಟರೆ ತಪ್ಪಾಗಲಾರದು ಅದು ತನ್ನ ಪ್ರಾಣ ಸ್ನೇಹಿತನ ಹೆಸರಾಗಿದ್ದರಿಂದ ಅವರ ನೆನಪಿಗೊಸ್ಕರ ಈ ಹೆಸರನ್ನು ಇಡಲೂ ಇಷ್ಟ ಪಡುತ್ತೇನೆ. ತಾನೂ ದುಡ್ಡಿಗೊಸ್ಕರ ಅಲ್ಲಾ ಮತ್ತು ಪ್ರಚಾರಿಗೊಸ್ಕರ ಅಲ್ಲಾ ಇದು ತನ್ನ ಸ್ನೇಹಿತನ ನೆನಪಿಗಾಗಿ ಮಾತ್ರ.

"ನಾನು ನನ್ನ ಮಕ್ಕಳ ಮೇಲೆ ಮತ್ತು ದೇವರ ಮೇಲೆ ಆಣೇ ಮಾಡಿ ಹೇಳುತ್ತೇನೆ, ನಾನು ದುಡ್ಡಿಗೊಸ್ಕರವಾಗಲಿ, ಪ್ರಚಾರಕ್ಕಾಗಲಿ ಈ ಹೆಸರಿಡುತ್ತೀಲ್ಲ ಕೇವಲ ಸ್ನೇಹಿತನ ಮೇಲಿನ ಪ್ರೀತಿಗಾಗಿ ಮಾತ್ರ ಹೆಸರಿಡುತ್ತೇನೆ. ಅಷ್ಟೇ ಅಲ್ಲದೇ ನಾನು ಭಾರತಿಯವರ ಜೊತೆ ಮಾತನಾಡಿಕೊಂಡು ಹೆಸರಿಡುತ್ತೇನೆ. ಅಷ್ಟೇ ಅಲ್ಲದೆ ತಾನು ಡಾ.ವಿಷ್ಣುವರ್ದನರವರ ಜೀವನ ಚರಿತ್ರೆಯ ಚಿತ್ರವನ್ನು ನಿರ್ಮಾಣ ಮಾಡಬೇಕೆಂದಿದ್ದೇನೆ. ಇದು ನನ್ನ ಆಶೆ ಕೂಡ ಹೌದು" ಎಂದು ದ್ವಾರಕೀಶರವರು ಹೇಳಿದರು.

ಆದರೆ ಭಾರತಿ ವಿಷ್ಣುವರ್ದನ ರವರು ಹಾಗೂ ವಿಷ್ಣುವರ್ದನರವರ ಅಭಿಮಾನಿಗಳು ವಿಷ್ಣುವರ್ದನ ಹೆಸರಿಡಲು ಸಮ್ಮತಿ ಕೊಟುವದಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿಯ ಅದ್ಯಕ್ಷರಾದ ವಸಂತ ಕುಮಾರ ಪಾಟೀಲರವರು ಬೇರೆ ಹೆಸರಿಡಲೂ ಸೂಚಿಸಿದ್ದಾರೆ. ಮುಂದೆನಾಗುತ್ತೆ ಅಂತ ಕಾದು ನೋಡೋಣ

No comments:

Post a Comment