Saturday, June 1, 2013

'ವಾರದ ಕಥೆ ಕಿಚ್ಚನ ಜೊತೆ' ಮೇ 31(1)




ಪ್ರತಿ ಶುಕ್ರವಾರದಂತೆ ಈ ಶುಕ್ರವಾರ ಕೂಡ  (ಮೇ 31) 'ವಾರದ ಕಥೆ ಕಿಚ್ಚನ ಜೊತೆ' ಯಲ್ಲಿ ಕಿಚ್ಚನ ಮಾತು ತುಂಬಾನೇ ಸೊಗಸಾಗಿತ್ತು. ತಮ್ಮದೇ ಆದಂತಹ ಶೈಲಿಯಲ್ಲಿ  ಆಕರ್ಷಕ ನಿರೂಪಣೇಯ ಮಾತಿನ ಮೂಲಕ ಸುದೀಪ್ ಪ್ರತಿವಾರ ತನ್ನ ವೀಕ್ಷಕರಿಗೆ ಮನರಂಜಿಸುತ್ತಿದ್ದಾರೆ. ಈ ವಾರವೂ ಕೂಡ ಅದೇ ರೀತಿ ಮನರಂಜಿಸಿದರು.

ಹಾಗೆ ರಂಜಿಸುತ್ತ ಈ ವರದ ಟಾಸ್ಕ್ ಬಗ್ಗೆ ಪ್ರಸ್ತಾಪಿಸಿದರು, ಹಾಗೆ ಎಲ್ಲರು ತಮ್ಮ ಟಾಸ್ಕ್ ನ್ನು ಚೆನ್ನಾಗಿ ಆಡಿದ್ದಿರಿ ಎಂದೂ ಬೆನ್ನುತಟ್ಟಿದರು. ಹಾಗೆ ಮಾತಿನಲ್ಲಿ ಬ್ರಹ್ಮಾಂಡ ಗುರುಗಳು ಬಿಟ್ಟ ಬಾಂಬ್ ನ್ನು  ನೆನದು ಎದ್ದುಬಿದ್ದು ನಕ್ಕರು. ಅಷ್ಟೇ ಅಲ್ಲದೆ ಅರುಣ್ ಸಾಗರ್ ನೀವೇಗೆ ಸಹಿಸಿಕೊಂಡಿರಿ ಎಂದೂ ಅವರನ್ನು ಕೇಳಿದರು.

ಜಲಸಂರಕ್ಷಣೆ ಟಾಸ್ಕ್ ನಲ್ಲಿ ಒಂದು ಕಡೆ ಗುರುಗಳು ಎರಡೂ ತೂತುಗಳನ್ನು ಮುಚ್ಚಿ ಹಿಡಿದಿದ್ದರು. ಇನ್ನೊಂದು ಕಡೆ ಅರುಣ್ ಸಾಗರ್ ಇದ್ದರು. ಇದೇ ಸಂದರ್ಭದಲ್ಲಿ ಗುರುಗಳು ಮತ್ತೆ ಬಾಂಬ್ ಹಾಕಿದರು. ಎರಡೂ ಕೈಗಳಿಂದ ಟ್ಯಾಂಕ್ ನ ತೂತನ್ನು ಮುಚ್ಚಿಕೊಂಡಿದ್ದ ಅರುಣ್ ಮೂಗು ಮುಚ್ಚಿಕೊಳ್ಳಲು ಸಾದ್ಯವಾಗಲಿಲ್ಲ ಮತ್ತು ನೀರು ಬಿಡುವಂತಿಲ್ಲ. "ಅಯ್ಯೋ ಪಾಪ ಅವನ ಪಾಡು ನೋಡೋಕಾಗುತ್ತಿರಲಿಲ್ಲ ರೀ" ಎಂದು ಹೇಳಿದ ಕಿಚ್ಚ ನಗಾಡಿದರು. ಲೂಸ್ ಮಾದ ಯೋಗೀಶ್ ನಮ್ಮ ತಂದೆಯವರ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿದನು.

No comments:

Post a Comment